ಶಿವಮೊಗ್ಗ: ಮೊನ್ನೆ ತಾನೇ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮುಖಾಮುಖಿ ಭೇಟಿ ಆಗಿದ್ದು , ಆ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ನಡುವೆ " ಮೋದಿ ದೇವೇಗೌಡರಿಗೆ ಅದೆಷ್ಟು ಗೌರವ ಕೊಟ್ಟರೆಂದು ಸಿದ್ಧ ರಾಮಯ್ಯ ನೋಡಿ ಕಲಿಯಲಿ. ಅವರ ನಡತೆ ಇವರಿಗೆ ಪ್ರೇರಣೆಯಾಗಲಿ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ಬಾಯಿಗೆ ಬಂದಂತೆ ಬಿಜೆಪಿ ಮುಖಂಡರನ್ನು , ರಾಜಕೀಯ ನಾಯಕರನ್ನು ಹೀಯಾಳಿಸುವುದನ್ನು ನಿಲ್ಲಿಸಲಿ.ಅಂಥವರಿಗೆ ನಾಗರಿಕತೆ ಅವಶ್ಯಕತೆ ಇದೆ " ಎಂದು ಹೇಳಿದರು.
ಪಕ್ಷಕ್ಕಿಂತ ಕೆಲಸಕ್ಕೆ ಪ್ರಾಮುಖ್ಯತೆ ಕೊಡುವುದನ್ನು ಮೊದಲು ಕಲಿಯಬೇಕು.ಒಳ್ಳೆಯದನ್ನು ಮಾಡುವಾಗ ಅದನ್ನು ಪ್ರೋತ್ಸಾಹಿಸುವ ಗುಣ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು.
0 Comments